ಹೊಸಕೋಟೆ: ತಾಲ್ಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಶೆಡ್ ಒಂದರ ಮುಂದೆ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 109 ಕೆ.ಜಿ. ತೂಕದ ₹ 1.31 ಲಕ್ಷ ಮೌಲ್ಯದ ರಕ್ತಚಂದನದ4 ತುಂಡುಗಳನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.
ತುಂಡುಗಳನ್ನು ಸಾಗಿಸಲು ಸಿದ್ಧರಾಗುತ್ತಿದ್ದ ಆರೋಪಿ ಶಾದಿಕ್ ಖಾನ್ ಮತ್ತು ಇತರರು ಅಲ್ಲಿಂದ ಪರಾರಿಯಾದರು. ತಿರುಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.