ಕೊಪ್ಪಳ: 'ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ ಬೇರೆ, ಬೇರೆ. ನಮ್ಮ ನಾಯಕ ಸಿದ್ದರಾಮಯ್ಯ. ರಾಜ್ಯದ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿಯೇ. ಇದರಲ್ಲಿತಪ್ಪೇನಿದೆ' ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಪ್ರಶ್ನಿಸಿದರು.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, 'ಮುಖ್ಯಮಂತ್ರಿ ಎಲ್ಲರಿಗೂ ಒಬ್ಬರೆ. ಆದರೆ, ಅವರವರ ನಾಯಕರು ಬೇರೆ, ಬೇರೆಯೇ ಇರುತ್ತಾರೆ' ಎಂದರು.
ಬರ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ತಂಡದ ನೇತೃತ್ವ ವಹಿಸಿದ್ದ ಬಂಡೆಪ್ಪ ಕಾಶೆಂಪುರ ಅವರು 'ರಾಯರಡ್ಡಿ ಹೇಳಿಕೆಗೆ ಅಷ್ಟೊಂದು ಮಹತ್ವ ನೀಡಬೇಕಿಲ್ಲ' ಎಂದು ಹೇಳಿ ಮುಂದೆ ಹೋದರು. ಜೊತೆಗೆ ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಇದ್ದರು.