‘ಅಕ್ರಮ ಗಣಿಗಾರಿಕೆ ನಡೆಸಿದ ಗಾಲಿ ಜನಾರ್ಧನ ರೆಡ್ಡಿ ಹಾಗೂ ಅಂದಿನ ಮುಖ್ಯಮಂತ್ರಿ ಜೈಲಿಗೆ ಹೋಗಿದ್ದು ಇನ್ನೂ ಹಸಿಯಾಗಿಯೇ ಇದೆ. ಅಲ್ಲದೆ ಗೋವಾ, ಒಡಿಶಾ ಇತರ ರಾಜ್ಯಗಳಲ್ಲೂ ಇಂಥ ಅಕ್ರಮಗಳು ನಡೆದಿವೆ. ಇವುಗಳಿಂದ ನಾವು ಇನ್ನೂ ಪಾಠ ಕಲಿತಿಲ್ಲ. ಹೀಗಾಗಿ ಇಂಥ ನಿರ್ಣಯದಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜನಾಂದೋಲನ ಮೂಡಿಸುವುದು ನಮ್ಮ ಮುಂದಿನ ನಡೆಯಾಗಿದೆ’ ಎಂದರು.