ಪ್ರಾದೇಶಿಕ ಅರಣ್ಯ ಇಲಾಖೆಗೆ ಸೇರಿದ ನರ್ಸರಿ ವಿಭಾಗದ ಬಳಿ ಮರ ಬೆಳೆದಿತ್ತು. ಮರಕ್ಕೆ ಸುಮಾರು 25 ವರ್ಷಗಳಾಗಿತ್ತು. ಇದರ ಕಾಂಡ 65ರಿಂದ 70 ಸೆ.ಮೀ ಸುತ್ತಳತೆ ಹೊಂದಿತ್ತು. ಅರಣ್ಯ ಇಲಾಖೆ ಆವರಣದಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ ಕೃತ್ಯ ನಡೆದಿರುವುದು ಸಂಶಯಕ್ಕೆ ಕಾರಣ ವಾಗಿದೆ. ಈ ಹಿಂದೆಯೂ ಇದೇ ಆವರಣದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಶ್ರೀಗಂಧದ ತುಂಡುಗಳನ್ನು ಕಳವು ಮಾಡಲಾಗಿತ್ತು. ಡಿಸಿಎಫ್ ವಸತಿ ಗೃಹದಲ್ಲಿ ಸುಮಾರು 60 ವರ್ಷಗಳ ಭಾರಿ ಗಾತ್ರದ ಶ್ರೀಗಂಧದ ಮರಗಳು ಬೆಳೆದಿದ್ದು, ಅವುಗಳಿಗೆ ತಗಡಿನ ಹೊದಿಕೆಗಳನ್ನು ಹಾಕಿ ರಕ್ಷಣೆ ಮಾಡಲಾಗಿದೆ.