ಬೆಳ್ಳಂಬೆಳಿಗ್ಗೆ ಅವರ ಹೆಸರೇಕೆ ತೆಗೆಯುತ್ತೀರಿ?: ಶಾಸಕ ಎ.ಮಂಜು ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬೆಳಿಗ್ಗೆ ಬೆಳಿಗ್ಗೆ ಅವರ ಹೆಸರೇಕೆ ತೆಗೆಯುತ್ತೀರಿ. ನಿಮ್ಮ (ಸುದ್ದಿಗಾರರು) ಬಾಯಲ್ಲಿ ಅಂಥವರ ಹೆಸರು ಬರಬಾರದು. ಕಳೆದ ಹತ್ತು ವರ್ಷಗಳಲ್ಲಿ, ಹಾಸನ ಜಿಲ್ಲೆ ತುಂಬಾ ತೊಂದರೆ ಅನುಭವಿಸಿದೆ. ಕುಡಿಯುವ ನೀರಿಗಾಗಿ ಭಿಕ್ಷುಕರ ರೀತಿಯಲ್ಲಿ ಕೇಳುವಂತಹ ಪರಿಸ್ಥಿತಿ ಇತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.