ಹುಬ್ಬಳ್ಳಿ:ಸಂಪುಟ ಸಭೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಚರ್ಚೆ ನಡೆದಿದ್ದು, ಪರಿಹಾರ ಕಾರ್ಯಗಳನ್ನು ಶೀಘ್ರವೇಚುರುಕುಗೊಳಿಸಲಾಗುವುದು ಎಂದು ನೂತನ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.
ಬುಧವಾರ ಹುಬ್ಬಳ್ಳಿಗೆ ಬಂದ ಶೆಟ್ಟರ್, ನನಗೆ ಯಾವ ಖಾತೆ ಕೊಟ್ಟರೂ ನಿಭಾಯಿಸುವೆ. ಒಬ್ಬೊಬ್ಬ ಸಚಿವರು ಎರಡೆರಡು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ನಾನು ಧಾರವಾಡ, ಕಾರವಾರ ಜಿಲ್ಲೆ, ಅಳ್ನಾವರ ಭಾಗದಲ್ಲಿ ಪ್ರವಾಸ ಕೈಗೊಳ್ಳುವೆ ಎಂದರು.
ನಮ್ಮ ಮೊದಲ ಆದ್ಯತೆ ನೆರೆ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳುವುದು. ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಸಂತ್ರಸ್ತರ ಪರಿಹಾರ ಕಾರ್ಯ ನಿಂತಿಲ್ಲ. ಕೇಂದ್ರದಿಂದ ಇನ್ನೂ ಹೆಚ್ಚಿನ ಅನುದಾನ ಬರುವ ನಿರೀಕ್ಷೆ ಇದೆ ಎಂದರು.
ಇಂದಿನ ಸರ್ಕಾರಗಳಲ್ಲಿ ಸಾಕಷ್ಟು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅವುಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.