ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೆರೆ ಸಂದರ್ಭದಲ್ಲಿ ನಾನು ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದೇನೆ. ಮುಂದಿನ ದಿನಗಳಲ್ಲೂ ನೆರವಾಗುತ್ತೇವೆ ಎಂದು ಅವರಿಗೆ ಪ್ರಚಾರದ ವೇಳೆಯೂ ಭರವಸೆ ಕೊಟ್ಟಿದ್ದೇವೆ. ಕೆಲವರು, ಅವರನ್ನು ರಾಜಕೀಯವಾಗಿ ಚಿವುಟಿ ಅಳಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಪ್ರಾಮಾಣಿಕವಾಗಿ ಅವರಿಗೆ ಸ್ಪಂದಿಸುತ್ತೇನೆ’ ಎಂದು ಹೇಳಿದರು.