ಐಐಎಸ್ಸಿ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡವು ದುರಂತದಲ್ಲಿ ಗಾಯಗೊಂಡಿರುವ ಅತುಲ್ಯ ಉದಯ್ಕುಮಾರ್, ಕಾರ್ತಿಕ್ ಶೆಣೈ ಹಾಗೂ ನರೇಶ್ ಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ. ‘ಚಿಕಿತ್ಸೆಯ ವೆಚ್ಚ ವಿಮೆ ಮೊತ್ತಕ್ಕಿಂತ ಹೆಚ್ಚಾದರೆ ಸಂಸ್ಥೆಯೇ ಭರಿಸುತ್ತದೆ’ ಎಂದು ಗಾಯಾಳುಗಳ ಸಂಬಂಧಿಕರಿಗೆ ಭರವಸೆ ನೀಡಿದೆ.