ಧಾರವಾಡ: ಐಐಟಿ ಧಾರವಾಡ ಕ್ಯಾಂಪಸ್ನಲ್ಲಿಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಐಐಟಿ ವಿದ್ಯಾರ್ಥಿಗಳು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಐಐಐಟಿ ಧಾರವಾಡ, ಮೊದಲ ಹಂತದ ನಗರ ಅನಿಲ ವಿತರಣೆ ಯೋಜನೆ, ಮಂಗಳೂರು ಮತ್ತು ಪಾದೂರು ತುರ್ತು ಅವಶ್ಯಕತೆ ಪೆಟ್ರೋಲಿಯಂ ಸಂಗ್ರಹ ಸೌಲಭ್ಯ, ಚಿಕ್ಕಜಾಜೂರು ಮಾಯಕೊಂಡ ಜೋಡಿ ರೈಲು ಮಾರ್ಗ ಪರಿವರ್ತನೆ, ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ 2350 ಮನೆಗಳ ಇ–ಗೃಹಪ್ರವೇಶವನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.