ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಹಗರಣ–ಆರೋಪಿ ಬಂದು ಹೆಸರು ಹೇಳಲಿ, ನೋಡೋಣ

ಬಿಜೆಪಿ ಆರೋಪಕ್ಕೆ ದೇವೇಗೌಡರ ಪ್ರತಿಕ್ರಿಯೆ
Last Updated 24 ಜೂನ್ 2019, 18:57 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಂಎ ಹಗರಣದ ಆರೋಪಿ ಮನ್ಸೂರ್‌ ಖಾನ್‌ ಬಂದು ಎಲ್ಲ ಹೇಳುತ್ತೇನೆ ಎಂದು ಹೇಳಿದ್ದಾನೆ. ಮುಖ್ಯಮಂತ್ರಿ ಎಷ್ಟು, ಇನ್ನೊಬ್ಬರು ಎಷ್ಟು ತೆಗೆದುಗೊಂಡರು ಎಂಬುದನ್ನು ತಿಳಿಸಲಿ. ಆಮೇಲೆ ನೋಡೋಣ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಸೋಮವಾರ ಹೇಳಿದರು.

ಸೋತ ಪಕ್ಷದ ಅಭ್ಯರ್ಥಿಗಳ ಸಭೆಯ ಬಳಿಕ ಮಾತನಾಡಿ, ಐಎಂಎ ಆರೋಪಿ ಜತೆ ಮುಖ್ಯಮಂತ್ರಿ ಊಟ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

‘ಒಳ್ಳೆಯ ಅಧಿಕಾರಿಗಳನ್ನೇ ಐಎಂಎ ತನಿಖೆಗೆ ನೇಮಿಸಲಾಗಿದೆ. ಮನ್ಸೂರ್ ಬರುವುದಕ್ಕೆ ಅನುಮತಿ ಕೊಟ್ಟಿದ್ದಾರೆ. ಶರವಣ ಹೆಸರು ಉಲ್ಲೇಖಿಸಿದ್ದಾನೆ. ಇನ್ನೂ ಯಾರ ಹೆಸರು ಹೇಳುತ್ತಾನೋ ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT