ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಒಳಪಡುವ ಸಮುದಾಯ ಆರೋಗ್ಯಕೇಂದ್ರಕ್ಕೆ ಬಾಳೆಲೆ, ಹುದಿಕೇರಿ, ತಿತಿಮತಿ, ದೇವರಪುರ, ಪಾಲಿಬೆಟ್ಟ, ಹಾತೂರು, ಪೊನ್ನಂಪೇಟೆ ಮೊದಲಾದ ಭಾಗದ ಜನರು ಬರುತ್ತಾರೆ. ಈಗಂತೂ ತುಸು ಕೆಮ್ಮಿದರೂ ಸಾಕು. ಅಕ್ಕಪಕ್ಕದ ಜನತೆ ಅನುಮಾನದಿಂದ ನೋಡುತ್ತಾರೆ. ಜ್ವರ ಎಂದು ಹೇಳಿದರೆ ಸಾಕು ಊರಿನ ಜನರೇ ಭಯಭೀತರಾಗುತ್ತಾರೆ. ಈಗ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ.