ಮಲಪ್ರಭಾ ಪ್ರವಾಹದಿಂದ ಹಾನಿಗೊಳಗಾಗಿರುವ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಸಂತ್ರಸ್ತರ ಅಹವಾಲು ಆಲಿಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸರ್ಕಾರ ಜಾಗ ಗುರುತಿಸಿ ನೀಡಬೇಕು ಜತೆಗೆ, ಅಲ್ಲಿ ಮನೆ ಕಟ್ಟಿದರೆ ಜನರು ವಾಸಿಸುವ ಭರವಸೆಯನ್ನೂ ನೀಡಬೇಕು. ಹಾಗಿದ್ದರೆ ಪ್ರತಿಷ್ಠಾನದಿಂದ ₹10 ಲಕ್ಷ ವೆಚ್ಛದಲ್ಲಿ ಒಂದು ಮನೆಯಂತೆ, ಮೊದಲ ಹಂತದಲ್ಲಿ 100 ಮನೆಗಳನ್ನು ನಿರ್ಮಿಸಲಾಗುವುದು. ನಂತರ ಎರಡನೆಯ ಹಂತದಲ್ಲಿ 100 ಮನೆಗಳನ್ನು ನಿರ್ಮಿಸಲಾಗುವುದು’ ಎಂದರು.