ಬೆಳಗಾವಿ: ಗೋವಾದ ರಿವಾ ಬೀಚ್ನ ಕಡಲತಡಿ ಎಂದಿನಂತಿರಲಿಲ್ಲ. ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಮೂಡಿದದ್ದವು. ಚಿಣ್ಣರ ಕೇಕೆ, ಯುವಕ–ಯುವತಿಯರ ಶಿಳ್ಳೆ–ಚಪ್ಪಾಳೆಗಳ ಸುರಿಮಳೆಯೊಂದಿಗೆ ಪತಂಗಗಳು ಗಾಳಿಯಲ್ಲಿ ನೃತ್ಯ ಮಾಡಿದವು.
– ಈ ದೃಶ್ಯಗಳು ಕಂಡುಬಂದಿದ್ದು, ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅಲ್ಲಿ ಆಯೋಜಿಸಿರುವ 6ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ.
ಚಾಲನೆ ನೀಡಿದ ಗೋವಾ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ದಯಾನಂದ ಸೋಪ್ಟೆ ಮಾತನಾಡಿ, ‘ಬೆಳಗಾವಿಯ ಶಾಸಕ ಅಭಯ ಪಾಟೀಲ ಗೋವಾದಲ್ಲಿ 6 ವರ್ಷಗಳಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸುತ್ತಿರುವುದು ಶ್ಲಾಘನೀಯ’ ಎಂದರು.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್ ಮೊದಲಾದ ಕಡೆಗಳಿಂದ ಗಾಳಿಪಟ ಹಾರಿಸುವವರು ಬಂದಿದ್ದರು.
ಪರಿವರ್ತನ ಪರಿವಾರದ ಪ್ರಮುಖರಾದ ಅಶೋಕ ನಾಯಕ, ದೀಪಕ ಗೋಜಗೇಕರ, ಪ್ರದೀಪ್ ಶೆಟ್ಟಿ, ಸಂದೇಶ ಸಾವಂತ, ಮನಿಷಾ ಕೋರ್ಗನಕರ, ಪವನ ಮೂರ್ಜೆ, ಅನಂತ ಗಡ್ಡೇಕರ, ಸೂರಜ ತಾಳಕರ ಇದ್ದರು.