ಸಚಿವ ಜಮೀರ್ ಅಹ್ಮದ್ ಅವರು ತಂಗಿದ್ದ ಕೊಠಡಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿದರು. ನಂತರ ಸಚಿವರಾದ ಬಂಡೆಪ್ಪ ಕಾಶೆಂಪುರ, ಆರ್.ವಿ. ದೇಶಪಾಂಡೆ, ಎಂ.ಟಿ.ಬಿ. ನಾಗರಾಜ್, ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಸೇರಿದಂತೆ ಹಲವು ಕೊಠಡಿಗಳನ್ನು ಚೆಕ್ ಮಾಡಲಾಯಿತು. ಗ್ರಾಹಕರ ಕೊಠಡಿಗಳನ್ನೂ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.