ಹಾವೇರಿ: ಜಿಲ್ಲೆಯ ಸವಣೂರ ತಾಲ್ಲೂಕಿನ ಕಲಿವಾಳ ಗ್ರಾಮದ ಯೋಧ ದೇವರಾಜ ಗುಳಗಂದಿ (28) ಮಂಗಳವಾರ ಬೆಳಿಗ್ಗೆ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗುಂಡುತಗುಲಿ ಹುತಾತ್ಮರಾಗಿದ್ದಾರೆ.
ದೇವರಾಜ ಅವಿವಾಹಿತರಾಗಿದ್ದು, 6 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು.
ಬುಧವಾರ ಮಧ್ಯಾಹ್ನ ವೀರಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.