‘ಶ್ರೀರಾಮುಲು, ಅವರ ಸಹೋದರಿ ಜೆ. ಶಾಂತಾ ಅವರು ಈ ಜಿಲ್ಲೆ ಹಾಗೂ ಅವರು ಪ್ರತಿನಿಧಿಸುವ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಉಗ್ರಪ್ಪನವರು ನಾಲ್ಕು ದಶಕಗಳಿಂದ ಸಾಮಾಜಿಕ ಜೀವನದಲ್ಲಿದ್ದಾರೆ. ಮೇಲಿಂದ ಕಾನೂನು ಪಂಡಿತರು. ಎಲ್ಲ ಜಾತಿ, ಜನಾಂಗದ ಬೆಂಬಲ ಅವರಿಗಿದೆ. ಚುನಾವಣೆಯಲ್ಲಿ ಒಳಗಿನವರು, ಹೊರಗಿನವರು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಉಗ್ರಪ್ಪ ಗೆಲುವು ನೂರಕ್ಕೆ ನೂರರಷ್ಟು ಖಚಿತ’ ಎಂದು ಭರವಸೆ ವ್ಯಕ್ತಪಡಿಸಿದರು.