ರಾತ್ರಿ 8 ಗಂಟೆಗೆ ಜೈಲಿನಿಂದ ಬಿಡುಗಡೆಯಾದ ರೆಡ್ಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿಸಿಬಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘2006ರಲ್ಲಿ ನಾನು, ಕುಮಾರಸ್ವಾಮಿ ವಿರುದ್ಧ 150 ಕೋಟಿಯ ಲಂಚದ ಆರೋಪ ಮಾಡಿದ್ದೆ. ಅದಕ್ಕೆ 12 ವರ್ಷಗಳ ಬಳಿಕ ಅವರು ಸೇಡು ತೀರಿಸಿಕೊಂಡಿದ್ದಾರೆ’ಎಂದು ಆರೋಪಿಸಿದರು.