ಲೇಖಕಿ ಬಿ.ಟಿ.ಲಲಿತಾ ನಾಯಕ್, ‘ಒಬ್ಬ ಸೈನಿಕನ ಸಾವಿನ ಬದಲಿಗೆ ಎದುರಾಳಿಯ ಮತ್ತೊಬ್ಬ ಸೈನಿಕನ ಜೀವಬಲಿ ಪಡೆಯಬೇಕು ಎಂಬುದು ಯಾವ ನ್ಯಾಯ? ಇಂತಹ ಹೇಳಿಕೆ ನೀಡುವ ಯಾವ ಸಂಸದ, ಶಾಸಕ ಅಥವಾ ಸಂಘಟನೆ ನಾಯಕರು ಗಡಿ ಕಾಯಲು ಸಿದ್ಧರಿದ್ದಾರೆ? ಸೈನಿಕರು ಬದುಕಿದ್ದಾಗ ಅವರ ಕಷ್ಟ–ಸುಖ ವಿಚಾರಿಸದವರು, ಹುತಾತ್ಮರಾದ ಬಳಿಕ ಮನೆಗಳಿಗೆ ಹೋಗಿ ಪೋಸು ಕೊಡುತ್ತಾರೆ. ಇಂತಹ ಬೂಟಾಟಿಕೆ ಬಿಡಬೇಕು’ ಎಂದರು.