‘ಚಾತುವರ್ಣ ವ್ಯವಸ್ಥೆ ತರತಮವನ್ನು ಹುಟ್ಟು ಹಾಕಿತು. ಸಂಪನ್ಮೂಲಗಳ ಅಸಮಾನ ಹಂಚಿಕೆ ಮಾಡಿತು. ಮನುಷ್ಯರನ್ನು ಶ್ರೇಷ್ಠ–ಕನಿಷ್ಠವೆಂದು ವಿಭಜನೆ ಮಾಡಿತು. ಸಮಾನತೆಯ ತತ್ವವನ್ನು ಬುದ್ಧ, ಮಹಾವೀರ, ಗುರುನಾನಕ್, ಸಿದ್ಧರು, ನಾಥರು ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಆಶಯಗಳು ಇನ್ನೂ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.