‘ನಾನೊಂದು ಸಾಕ್ಷ್ಯಚಿತ್ರ ನೋಡುತ್ತಿದ್ದೆ. ಅದರಲ್ಲಿ ಗಂಡಸರು ಶಹರಕ್ಕೆ ಹೋಗಿ ಕೂಲಿ ಕೆಲಸ ಮಾಡುತ್ತಿದ್ದರೆ, ಮಹಿಳೆಯರು ಮಲ ಹೊರುವ ಕೆಲಸ ಮಾಡುತ್ತಿರುತ್ತಾರೆ. ಪತ್ರಕರ್ತೆಯೊಬ್ಬರು, ಈ ಕಾಲದಲ್ಲಿಯೂ ಮಲ ಹೊರುವ ಕೆಲಸ ಮಾಡುತ್ತೀರಲ್ಲ. ಈ ಕೆಟ್ಟ ಪದ್ಧತಿ ನಿಮಗೆ ಹೇಸಿಗೆ ಎನಿಸುವುದಿಲ್ಲವೇ ಎಂದು ಮಹಿಳೆಯರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಆ ಮಹಿಳೆಯರು, ನಾವು ನಮ್ಮ ಮಕ್ಕಳದ್ದು ತೆಗೆಯುವುದಿಲ್ಲವೇ.. ಇದನ್ನೂ ಹಾಗೆಯೇ ತೆಗೆದುಬಿಡುತ್ತೇವೆ ಎನ್ನುತ್ತಾರೆ. ದೈನ್ಯವನ್ನು ದಿವ್ಯಕ್ಕೆ ಏರಿಸುವ ತಾಯ್ತನ ಅದು’ ಎಂದು ಕಾಯ್ಕಿಣಿ ಹೇಳಿದರು.