ಕೊಡ್ಲಿಪೇಟೆ (ಕೊಡಗು ಜಿಲ್ಲೆ): ‘ವಿಧಾನ ಪರಿಷತ್ ಸದಸ್ಯರಾಗುವುದಕ್ಕೂ ಮೊದಲು ಒಂದು ರೀತಿಯ ಮಾತು. ಗೆದ್ದಾದ ಮೇಲೆ ಬೇರೆ ರೀತಿಯ ನಡವಳಿಕೆ. ಇದು ಸರಿಯಲ್ಲ. ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿಕೆಗೆ ಶುಕ್ರವಾರ ಇಲ್ಲಿ ತಿರುಗೇಟು ನೀಡಿದರು.