‘ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಗೆಲುವು ಸುಲಭ ಅಲ್ಲ. ಆದರೆ ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಿನ ಪ್ರಯತ್ನ ನಡೆಯಲೇಬೇಕು. ಮಹಿಳಾ ಸಮಾವೇಶ, ಪರಿಶಿಷ್ಟ ಜಾತಿ, ಪಂಗಡದವರ ಸಮಾವೇಶ ನಡೆಸುವ ಚಿಂತನೆ ಇದೆ. ಮುಸ್ಲಿಮರಿಗೆ ಪಕ್ಷ ನೀಡಿದಷ್ಟು ಪ್ರಾತಿನಿಧ್ಯ ಮತ್ಯಾರೂ ನೀಡಿಲ್ಲ. ಪಕ್ಷದ ಕಳಕಳಿಯನ್ನು ಜನಸಾಮನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದರೆ ಮತ್ತೆ ಪಕ್ಷ ಕಟ್ಟಿ ಬೆಳೆಸುವುದು ಕಷ್ಟವಲ್ಲ’ ಎಂದು ದೇವೇಗೌಡರು ಹೇಳಿದರು.