ಹಚ್ಚ ಹಸಿರಾಗಿದ್ದ ಕಾಡನ್ನು ಕಡಿದು ಕಾಂಕ್ರೀಟ್ ಕಾಡು ನೆಲೆಯೂರಿ, ಪಕ್ಷಿಗಳು ನೀರು, ಆಹಾರ ಸಿಗದೆ ತಮ್ಮ ಆವಾಸ ಸ್ಥಾನವನ್ನು ಬದಲಾಯಿಸುತ್ತವೆ. ಇದನ್ನು ತಪ್ಪಿಸಿ ಪಕ್ಷಿ, ಪತಂಗಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವಂತೆ ಮಾಡಬೇಕಾಗಿದೆ. ಇಲ್ಲದಿದ್ದರೆ ಪಕ್ಷಿ ಸಂಕುಲ, ಸಸ್ಯರಾಶಿ ವಿನಾಶದಂಚಿಗೆ ಹೋಗುತ್ತವೆ ಎಂದು ಅವರು ಕಾರ್ಯಾಗರದಲ್ಲಿ ಹೇಳಿದರು.