ಚುನಾವಣೆಯಲ್ಲಿ ಪಕ್ಷದ ಶೂನ್ಯ ಸಂಪಾದನೆಯಿಂದಾಗಿ ಶಾಸಕರಿಗೆ ಅಭದ್ರತೆ ಮೂಡಿದ್ದು, ಪಕ್ಷದ ‘ಚೌಕಾಸಿ’ ಅವಕಾಶ ತಪ್ಪಿ ಹೋದ ಕಾರಣ ಇನ್ನು ತಮ್ಮನ್ನು ಕೇಳುವವರೇ ಇಲ್ಲ ಎಂಬ ಭಾವನೆ ಕಾಡತೊಡಗಿದೆ. ಹೀಗಾಗಿ ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಳ್ಳುವಂತಹ ಅಥವಾ ದೊಡ್ಡ ಮಟ್ಟದಲ್ಲಿ ಪಕ್ಷಾಂತರಗೊಳ್ಳುವಂತಹ ಚಿಂತನೆಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.