‘2019ಕ್ಕೆ ಈ ದೇಶದ ಸಂವಿಧಾನ ಬದಲಾಯಿಸುವ ನಿರ್ಣಯವನ್ನು ಸಂಘ ಪರಿವಾರದವರು ಮಾಡಿದ್ದು, ಮೀಸಲಾತಿಯನ್ನು ಕೈಬಿಡಲಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬಲಾಯಿಸುತ್ತೇವೆ ಎಂದು ಹೇಳುವವರನ್ನೇ ಬದಲಾಯಿಸುವ ಛಲವನ್ನು ನೀವು ಹೊಂದಬೇಕು. ಅಂಬೇಡ್ಕರ್ ನೀಡಿರುವ ಸಂವಿಧಾನದಿಂದಾಗಿ ಮೋದಿ ಪ್ರಧಾನಿಯಾಗಿದ್ದಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಈ ದೇಶದ ಜನರನ್ನು ಯಾವ ದೇವರೂ ರಕ್ಷಣೆ ಮಾಡಲಿಲ್ಲ. ಆದರೆ, ರಕ್ಷಣೆ ಮಾಡಿದ್ದು ಅಂಬೇಡ್ಕರ್ ಮಾತ್ರ’ ಎಂದು ಹೇಳಿದರು.