ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ ಸರ್ಕಾರ ಭೂಮಿ ಮಾರಾಟ ಮಾಡುವ ಮೂಲಕ ಕಮಿಷನ್ ದಂಧೆ ನಡೆಸಿದೆ. ರಾಜ್ಯದ ಯಾವುದೇ ಭಾಗದಲ್ಲಾದರೂ ಒಂದು ಎಕರೆ ಭೂಮಿ ಬೆಲೆ ಕನಿಷ್ಠ ₹ 10 ಲಕ್ಷಕ್ಕೂ ಅಧಿಕ ಇರುವಾಗ ಸರ್ಕಾರವು ಎಕರೆಗೆ ಕೇವಲ ₹1.22 ಲಕ್ಷದಂತೆ 3,667 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಹೋರಾಟ ನಡೆಸಲಿದೆ’ ಎಂದು ಎಚ್ಚರಿಸಿದರು.