ನ್ಯಾಯಾಧೀಶರಾದ ರಾಜೇಶ್ವರಿ ಅವರು ತಮ್ಮ ಪುತ್ರನ ಜತೆ ಶನಿವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ತೆರಳಿದ್ದರು. ದಸರಾ ಗೋಲ್ಡ್ ಕಾರ್ಡ್ ಹೊಂದಿದ್ದರೂ ದೇವಸ್ಥಾನದ ಒಳಗೆ ಹೋಗದಂತೆ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ಹಾಗೂ ಭದ್ರತಾ ಸಿಬ್ಬಂದಿ ಮಹದೇವಸ್ವಾಮಿ ತಡೆದಿದ್ದಾರೆ. ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.