ಯೋಜನೆ ಮೂಲಕ ಕೆರೆಗಳಿಗೆ ಕಲುಷಿತ ನೀರು ಹರಿಸದೆ, ಶುದ್ಧೀಕರಿಸಿದ ನೀರನ್ನು ಹರಿಸುವುದರಿಂದ ಜನತೆಗೆ ಅನುಕೂಲವಾಗಲಿದೆ. ನೀರು ಭೂಮಿಯೊಳಗೆ ಇಂಗುವ ಸಂದರ್ಭ ನೈಸರ್ಗಿಕವಾಗಿ ಮತ್ತೆ ಶುದ್ಧೀಕರಣಗೊಳ್ಳುವುದರಿಂದ ಕೊಳವೆ ಬಾವಿ ಮೂಲಕ ಪಡೆಯುವ ನೀರನ್ನು ಕುಡಿಯುವುದಕ್ಕೆ ಹಾಗೂ ನೀರಾವರಿ ಬಳಕೆಗೆ ಅಪಾಯ ಎದುರಾಗದು ಎಂದು ವಿವರಿಸಲಾಗಿದೆ.