‘ಪುಸ್ತಕ ಬಿಡುಗಡೆ ಸಮಾರಂಭ ಇದ್ದುದರಿಂದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನೀಲಾ ಮೊದಲೇ ಹೇಳಿದ್ದರು. ಆದರೆ, ಮೋಹನ ಆಳ್ವ ಮತ್ತು ರಘುಪತಿ ಭಟ್ರಂತಹ ವಚನ ತತ್ವ ವಿರೋಧಿಗಳು ಇರುವುದರಿಂದ ಪಾಲ್ಗೊಳ್ಳುವುದಿಲ್ಲ ಎಂದು ಸುಳ್ಳು ಹೇಳಿ ಆತ್ಮವಂಚನೆ ಮಾಡಿಕೊಂಡಿದ್ದಾರೆ ಎಂದು ಸ್ವಾಮೀಜಿಗಳು ಟೀಕೆ ಮಾಡಿದ್ದಾರೆ. ಸ್ವಾಮೀಜಿಯವರ ಬಗ್ಗೆ ಗೌರವವಿದೆ. ಆದರೆ, ಅವರು ಈ ರೀತಿ ವೈಯಕ್ತಿಕ ದಾಳಿ ಮಾಡುವ ಬದಲು ತಾತ್ವಿಕ ನೆಲೆಯಲ್ಲಿ ಟೀಕೆ ಮಾಡಬಹುದಿತ್ತು’ ಎಂದು ನೀಲಾ ಹೇಳಿದ್ದಾರೆ.