ಮಂಗಳೂರು: ‘ಕಮ್ಯುನಿಸ್ಟ್ ಪಕ್ಷಗಳು ಒಂದಾಗಬೇಕು ಮತ್ತು ಕಾಸರಗೋಡು ಕರ್ನಾಟಕದಲ್ಲಿ ಸೇರಬೇಕು’ ಎಂಬುದು ಬಿ.ವಿ.ಕಕ್ಕಿಲ್ಲಾಯ ಕನಸಾಗಿದ್ದರೆ, ‘ಕರಾವಳಿಯಲ್ಲಿನ ಕೋಮುವಾದದ ಬಗ್ಗೆ ಅವರಿಗೆ ತೀವ್ರ ಬೇಸರವಿತ್ತು.’ –ನಗರದಲ್ಲಿ ಭಾನುವಾರ ಬಿ.ವಿ.ಕಕ್ಕಿಲಾಯ ಶತಾಬ್ದಿ ಕಾರ್ಯಕ್ರಮದಲ್ಲಿ ‘ಬಿ.ವಿ. ಕಕ್ಕಿಲ್ಲಾಯ: ಮಲಬಾರಿನಿಂದ ಕರ್ನಾಟಕ ವಿಧಾನಸಭೆಯವರೆಗೆ’ವಿಷಯ ಕುರಿತು ಸಿಪಿಐ ಮುಖಂಡ ಡಾ. ಸಿದ್ಧನಗೌಡ ಪಾಟೀಲ್ ಹೇಳಿದರು.