‘ಪ್ರಧಾನಿಯೇ ಕಲಬುರ್ಗಿಗೆ ಬರುತ್ತಿದ್ದಾರೆ. ಕಲ್ಲಿನನಾಡನ್ನು ಚಿನ್ನದನಾಡು ಮಾಡಿಬಿಡುತ್ತಾರೋ ಏನೋ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದೆ. ಆದರೆ, ಬರಿಗೈಯಲ್ಲಿ ಬಂದು ಹಾಗೇ ಹೋಗಿದ್ದಾರೆ. ಇಷ್ಟಕ್ಕಾಗಿ ಇಲ್ಲಿಯವರೆಗೆ ಬರಬೇಕಿತ್ತೇ? ಐದು ವರ್ಷಗಳಲ್ಲಿ ಈ ಜಿಲ್ಲೆಗೆ ಮಾಡಿದ ಒಂದೇ ಒಂದು ಕೆಲಸವನ್ನಾದರೂ ಬಾಯಿಬಿಟ್ಟು ಹೇಳಬೇಕಿತ್ತು. ಏಕೆ ಹೇಳಲಿಲ್ಲ?’ ಎಂದು ಕೇಳಿದರು.