ಈ ಕುರಿತು ಬುಡ್ಡೇಸಾಬ್ ಪ್ರತಿಕ್ರಿಯಿಸಿ, ‘ಬೈಕ್ ಕಳೆದುಹೋದ ಒಂದೂವರೆ ಗಂಟೆಯಲ್ಲೇ ಠಾಣೆಗೆ ಹೋಗಿ ದೂರು ನೀಡಿದ್ದೆವು. ಎಫ್ಐಆರ್ ಆಗ ಮಾಡಿರಲಿಲ್ಲ. ವಿಚಾರಣೆ ನಡೆಸಿ ತಿಳಿಸಲಾಗುವುದು ಎಂದಷ್ಟೇ ಪೊಲೀಸರು ಹೇಳಿದರು. ಈ ನಡುವೆ ನಮ್ಮ ಭಾವ ತೀರಿಕೊಂಡರು. ಹೀಗಾಗಿ ನಾವೂ ಬೈಕ್ ವಿಷಯವನ್ನು ಅಲ್ಲಿಗೇ ಕೈಬಿಟ್ಟೆವು. ಆದರೆ ಮೂರು ವರ್ಷ ನಂತರ ಬಂದ ಬೆಂಗಳೂರಿನ ಪೊಲೀಸರು, ಬೈಕ್ ಸಿಕ್ಕಿದೆ ಎಂದು ನಮ್ಮನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ಮತ್ತು ವಿಚಾರಣೆ ನಡೆಸಿದರು. ಕಳುವಾದ ದಿನ ಮದುವೆ ಇತ್ತೇ ಎಂದು ಲಗ್ನಪತ್ರಿಕೆ ಪಡೆದು ಪರಿಶೀಲಿಸಿದರು’ ಎಂದು ಮಾಹಿತಿ ನೀಡಿದರು.