‘ಹೈದರಾಬಾದ್ ಕರ್ನಾಟಕ ಎಂಬ ಪದ ಎಲ್ಲೆಲ್ಲಿ ಬಳಕೆಯಾಗಿದೆಯೋ ಅಲ್ಲೆಲ್ಲ ಕಲ್ಯಾಣ ಕರ್ನಾಟಕ ಎಂದು ವಿವೇಚನೆ ಇಲ್ಲದೇ ಬಳಸಿದ್ದರಿಂದ ಸಾಕಷ್ಟು ಗೊಂದಲವುಂಟಾಗಿದೆ. ಕಲ್ಯಾಣ ಕರ್ನಾಟಕದಿಂದಲೇ ವಿಮೋಚನೆ ಎಂಬ ತಪ್ಪು ಅರ್ಥವೂ ಹೊರ
ಹೊಮ್ಮುವ ಸಾಧ್ಯತೆ ಇದೆ. ಹೀಗಾಗಿ ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕು’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.