ಪ್ರಶಸ್ತಿ ವಿಜೇತೆ ಯೋಗ ಪಟು ಖುಷಿ ಅವರ ಯೋಗ ಕಾರ್ಯಕ್ರಮದ ಮೂಲಕವೇ ಸಮಾರಂಭ ಆರಂಭವಾ
ಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಅವರು ಮುಂದಿನ ದಿನಗಳಲ್ಲಿ ಯುವ ಸಾಧಕರಿಗೆ ಹೆಚ್ಚು ಪ್ರಶಸ್ತಿ ಸಿಗುವಂತಾಗಬೇಕು, ಜಗತ್ತಿನಲ್ಲಿ ಕನ್ನಡವನ್ನು ಕಟ್ಟಿ, ಬೆಳೆಸುವವರು ಅವರೇ ಎಂದರು. ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ಡೆಪ್ಯುಟಿ ಚೆನ್ನಬಸಪ್ಪ ಅವರು ತಮ್ಮ ಜಮೀನು ಮಾರಿ ವೀರಶೈವ ಹಾಸ್ಟೆಲ್ ಉಳಿಸಿದ ದೃಷ್ಟಾಂತವನ್ನು ತಿಳಿಸಿ, ನಾಡಿನಲ್ಲಿ ಇಂತಹ ಅದೆಷ್ಟೋ ಸಾಧಕರು ಇದ್ದಾರೆ ಎಂದರು. ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಥಳಾವಕಾಶ ಇಲ್ಲದೆ ನೂರಾರು ಜನ ಹೊರಗಡೆಯೇ ನಿಂತಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಅವರು, ಮುಂದಿನ ವರ್ಷ ಪ್ರಶಸ್ತಿ ಪ್ರದಾನವನ್ನು ಬೇರೆಡೆ, ವಿಶಾಲ ಪ್ರದೇಶದಲ್ಲಿ ಮಾಡುವುದಾಗಿ ಪ್ರಕಟಿಸಿದರು.