ಗಣ್ಯರು, ವಿಶೇಷ ಆಹ್ವಾನಿತರು, ಕೇಂದ್ರ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ಹುಬ್ಬಳ್ಳಿ– ಧಾರವಾಡದ ಹೋಟೆಲ್ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಚಳಿ ಹೆಚ್ಚಿಗೆ ಬಾಧಿಸದು. ವಿವಿಧ ಜಿಲ್ಲೆಗಳ 16 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದಾರೆ. ಅವರಿಗೆ ವಸತಿ ನಿಲಯ, ಕಲ್ಯಾಣ ಮಂಟಪ, ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇಂತಹ ಕಡೆಗಳಲ್ಲಿ ಉಳಿದುಕೊಳ್ಳುವವರು ಚಳಿಯಿಂದ ಪಾರಾಗಲು ಹೊದಿಕೆ ತರುವುದು ಒಳ್ಳೆಯದು.