ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುವ ಹೊತ್ತಿಗೆ ರಾಜ್ಯಪಾಲರ ಪ್ರತಿನಿಧಿಗಳೂ ಸದನಕ್ಕೆ ಬಂದಿದ್ದು, ನಿಯಮಿತವಾಗಿ ಕಲಾಪದ ವರದಿಯನ್ನು ರವಾನಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಎಲ್ಲ ವಿವರಗಳನ್ನು ದಾಖಲಿಸಿಕೊಂಡರು.ಸದನದಲ್ಲಿ ನಡೆಯುತ್ತಿದ್ದ ಚರ್ಚೆ, ವಿದ್ಯಮಾನಗಳು, ಸಭಾಧ್ಯಕ್ಷರ ನಡೆ, ಮೈತ್ರಿ ಪಕ್ಷಗಳ ಶಾಸಕರ ನಡವಳಿಕೆಗಳನ್ನು ದಾಖಲಿಸಿಕೊಂಡು ವರದಿ ಸಲ್ಲಿಸಿದರು.