ಹರತಾಳು ಹಾಲಪ್ಪ ಮಾತನಾಡಿ, ‘ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಭೂಕಬಳಿಕೆ ನಿಷೇಧಕ್ಕಾಗಿ ಭೂಕಂದಾಯ ಅಧಿನಿಯಮ 192 ಎ ಜಾರಿಗೆ ತರಲಾಯಿತು. ಸರ್ಕಾರಿ ಭೂಕಬಳಿಕೆದಾರರು, ಭೂಮಾಫಿಯಾ ಮತ್ತು ಹೌಸಿಂಗ್ ಸೊಸೈಟಿಗಳನ್ನು
ಮಟ್ಟ ಹಾಕುವುದು ಉದ್ದೇಶವಾಗಿತ್ತು. ಆದರೆ, ಇದರಿಂದ ಅನ್ಯಾಯಕ್ಕೆ ಒಳಗಾದವರು ಮಲೆನಾಡು ಭಾಗದ ರೈತರು’ ಎಂದು ಹೇಳಿದರು.