ಬೆಂಗಳೂರು: ರಾಜ್ಯ ಹೈಕೋರ್ಟ್ನ ಸಹಾಯಕ ಸಾಲಿಸಿಟರ್ ಜನರಲ್ ಸಿ.ಶಶಿಕಾಂತ್ ಅವರ ತಾಯಿ ಭವಾನಮ್ಮ (82) ಮಂಗಳವಾರ ಬೆಳಗ್ಗೆ 6.25ಕ್ಕೆ ಸಾಗರ ತಾಲ್ಲೂಕಿನ ಚಿಪ್ಪಳಿಗ್ರಾಮದ ತಮ್ಮಮನೆಯಲ್ಲಿ ನಿಧನರಾದರು.
ಅವರಿಗೆ ವರ್ತಕರಾದ ಪತಿ ಚಿಪ್ಪಳಿಗೋಪಾಲ ಕೃಷ್ಣ ರಾವ್, ಸಿ.ಶಶಿಕಾಂತ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.
"ಅಂತ್ಯಕ್ರಿಯೆ ಇಂದು (ನ.20) ಮಧ್ಯಾಹ್ನ 1.30ಕ್ಕೆ ಚಿಪ್ಪಳಿಗ್ರಾಮದಲ್ಲಿ ನಡೆಯಲಿದೆ" ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಿಪ್ಪಳಿಗೋಪಾಲಕೃಷ್ಣ ರಾವ್ ಸಾಗರದ ಪ್ರಸಿದ್ಧ ಅಡಿಕೆ ವರ್ತಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.