ನೂತನ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರು ಅಭಿವೃದ್ಧಿ, ರಮೇಶ ಜಾರಕಿಹೊಳಿಅವರು ಜಲಸಂಪನ್ಮೂಲ, ಬಿ.ಸಿ. ಪಾಟೀಲ ಅವರು ಗೃಹ, ಡಾ.ಕೆ ಸುಧಾಕರ್ ಅವರು ವೈದ್ಯಕೀಯ ಶಿಕ್ಷಣ ಅಥವಾ ಅರಣ್ಯ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಉಳಿದ ಸಚಿವರೂ ಲಾಭದಾಯಕ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಬಳಿ ಇರುವ ಖಾತೆಯನ್ನು ಮರು ಹಂಚಿಕೆ ಮಾಡುವ ಜತೆಗೆ, ಆರು ತಿಂಗಳ ಹಿಂದೆ ಸಚಿವರಾಗಿರುವವರ ಬಳಿ ಇರುವ ಕೆಲವರ ಖಾತೆಯನ್ನು ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಇದನ್ನು ಯಡಿಯೂರಪ್ಪ ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲವೂ ಮೂಡಿದೆ.