ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸುತ್ತಿರುವ ಬಜೆಟ್ನಲ್ಲಿ ಕೃಷಿ ಸೇರಿದಂತೆ ಇತರ ಕ್ಷೇತ್ರಗಳಿಗೆ ಒತ್ತು ನೀಡುತ್ತಿರುವುದಾಗಿ ಪ್ರಸ್ತಾಪಿಸಿ, ಅಂಟುವಾಳ ಬಳಸಿ ಸಾಬೂನು ತಯಾರಿಸಲು ಉತ್ಯೇಜನ ನೀಡಲು ಅಂಟುವಾಳ ಬೆಳೆಉತ್ತೇಜನ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಬಜೆಟ್ ಪ್ರಮುಖ ಅಂಶಗಳು * ಕರ್ನಾಟಕ ರಾಜ್ಯ ರೈತ ಸಲಹಾ ಸಮಿತಿ ರಚನೆ. ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
* ಬೇಸಾಯ ನೀ ಸಾಯ ಎಂಬ ಮಾತಿದೆ. ರೈತರ ಉತ್ಪನ್ನಗಳಿಗೆ ಬೆಲೆ ಇಲ್ಲದಿರುವುದು. ಮಳೆ ಕೊರತೆ ಇತ್ಯಾದಿ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ಅವರ ಸಮಸ್ಯೆ ನಿವಾರಿಸಲು ಸಾಲಾ ಮನ್ನಾ ಕ್ರಮ.
* ಆಂಧ್ರದಲ್ಲಿ ಜಾರಿಯಾಗುತ್ತಿರುವ ಶೂನ್ಯ ಬಂಡವಾಳ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸಲು ಕ್ರಮ
* ಅಂಟುವಾಳ ಮರ ಬೆಳೆಸಲು ಯೋಜನೆ. ಅಂಟುವಾಳ ಸಹಿತ ಸಾಬೂನು ತಯಾರಿಕೆಗೆ ಪ್ರೋತ್ಸಾಹಿಸಲು ಈ ಕ್ರಮ
* ಇಸ್ರೇಲ್ ಮಾದರಿ ನೀರವಾರಿ ಯೋಜನೆಗೆ ₹150 ಕೋಟಿ
* ತೆಂಗು ಬೆಳೆಗಾರರ ಹಿತ ರಕ್ಷಣೆಗೆ ₹190 ಕೋಟಿ
* ರೇಷ್ಮೆ: ಮೈಸೂರು ಜಿಲ್ಲೆಯಲ್ಲಿ ₹3 ಕೋಟಿ ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ. ಇದಕ್ಕೆ 2018–19ರ ಸಾಲಿನಲ್ಲಿ ಒಂದು ಕೋಟಿ ಒದಗಿಸಲಾಗುವುದು.
* ತಲಘಟ್ಟಪುರದಲ್ಲಿನ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪುನಶ್ಚೇತನಕ್ಕೆ ₹ 5 ಕೋಟಿ.
* ಸಾಂಪ್ರದಾಯಿ ರೇಷ್ಮೆ ಉತ್ಪನ್ನ ಜತೆ ಉಪ ಉತ್ಪನ್ನಗಳಾದ ಉಗುರು ಪಾಲೀಷ್, ಲಿಪ್ಸ್ಟಿಕ್ ಹಾಗೂ ರೇಷ್ಮೆ ಬಣ್ಣಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಇದನ್ನು ಪ್ರೋತ್ಸಾಹಿಸಲು ₹2 ಕೋಟಿ ನೀಡಲಾಗುವುದು.
* ಚನ್ನಪಟ್ಟಣದ ರೇಷ್ಮೆ ಕೈಗಾರಿಕಾ ನಿಗಮದ ಪುನಶ್ಚೇತನಕ್ಕೆ ₹5 ಕೋಟಿ.