ಈ ಬಗ್ಗೆ ಗುರುವಾರ 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, 'ಚುನಾವಣೆಗೆ ಸ್ಪರ್ಧಿಸುವಂತೆ ಬಹಳಷ್ಟು ಭಕ್ತರು ಕೇಳಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಚರ್ಚಿಸಲು ಶುಕ್ರವಾರ (ನ.15) ಬೆಳಿಗ್ಗೆ 11ಕ್ಕೆ ಮಠದಲ್ಲಿ ಸಭೆ ಕರೆಯಲಾಗಿದೆ. ಜನಾಭಿಪ್ರಾಯ ತಿಳಿದು ವಿವೇಚನಾಯುಕ್ತ ತೀರ್ಮಾನ ಘೋಷಣೆ ಮಾಡುತ್ತೇನೆ' ಎಂದು ತಿಳಿಸಿದರು.