ಹೊಸಪೇಟೆ: ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರಿಗೆ ಮತ ಚಲಾಯಿಸುವ ಪೊಟೊವನ್ನ ಕ್ಲಿಕ್ಕಿಸಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ.
ಹೊಸಪೇಟೆ ನಗರದ ತುಂಬೆಲ್ಲ ಎಲ್ಲರ ಮೊಬೈಲ್ಗಳಲ್ಲಿ ಪೊಟೊಗಳು ಹರಿದಾಡುತ್ತಿವೆ.
ಮತಗಟ್ಟೆಯಲ್ಲಿ ಮೊಬೈಲ್ ತೆಗೆದುಕೊಂಡು ಹೊಗುವುದಕ್ಕೆ ನಿಷೇದವಿದ್ದರುಮತಗಟ್ಟೆಯಲ್ಲಿ ಮೊಬೈಲ್ ಸಂಚಾರ ಸರ್ವೇ ಸಾಮಾನ್ಯವಾಗಿದೆ. ಮತಗಟ್ಟೆಯ ಅಧಿಕಾರಿಗಳ ನಿರ್ಲಕ್ಷವೇ ಕಿಡಿಗೇಡಿಗಳ ಕೃತ್ಯಕ್ಕೆ ಕಾರಣವಾಗಿದೆ.
ನೀರಸ ಪ್ರತಿಕ್ರಿಯೆ
ಹತ್ತು ಗಂಟೆಯಾದರೂ ಮತಗಟ್ಟೆ ಕಡೆ ಮತದಾರರು ಸುಳಿಯುತ್ತಿಲ್ಲ. ಎಲ್ಲೆಡೆ ನೀರಸ ಪ್ರತಿಕ್ರಿಯೆ ಇದೆ. ಚಿತ್ತವಾಡ್ಗಿಯ ಮತಗಟ್ಟೆ ಸಂಖ್ಯೆ ಮೂರರಲ್ಲಿ ಹತ್ತು ಗಂಟೆಯ ವರೆಗೆ 261 ಜನ ಮತ ಹಾಕಿದ್ದಾರೆ. ಒಟ್ಟು 1201 ಮತದಾರರು ಈ ಮತಗಟ್ಟೆಯಲ್ಲಿ ಇದ್ದಾರೆ.