ಸೋಮವಾರ ಖಾಸಗಿ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಸುಳಿವು ನೀಡಿದ್ದು, ‘ಲಾಕ್ಡೌನ್ನಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನೌಕರರ ಹಿತ ಕಾಪಾಡುವ ಸಲುವಾಗಿ ಏಪ್ರಿಲ್ ತಿಂಗಳಲ್ಲಿ ಯಾರಿಗೂ ಸಂಬಳ ಕಡಿತ ಮಾಡುವುದಿಲ್ಲ. ಲಾಕ್ಡೌನ್ ಇದೇ 14ಕ್ಕೆ ಕೊನೆಗೊಂಡರೆ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿಗೆ ಮರಳಿ ಸಂಬಳ ಕೊಡುವುದಕ್ಕೆ ಯಾವ ತೊಂದರೆಯೂ ಆಗಲಾರದು, ಆದರೆ ಲಾಕ್ಡೌನ್ ಮುಂದುವರಿದರೆ ಮಾತ್ರ ಮುಂದಿನ ತಿಂಗಳ ಸಂಬಳದಲ್ಲಿ ಎಷ್ಟು ಕಡಿತ ಮಾಡ
ಬೇಕು ಎಂಬುದರ ಬಗ್ಗೆ ಚರ್ಚಿಸುವ ಅಗತ್ಯ ಬೀಳಬಹುದು’ ಎಂದರು.