ಬೆಳಗಾವಿ: ‘ರೈತರು ಕೇಳಿದಷ್ಟು ಬೆಳೆ ಹಾನಿ ಪರಿಹಾರ ಕೊಡಲಾಗುವುದಿಲ್ಲ. ನನ್ನದೂ 100 ಎಕರೆ ಬೆಳೆ ಹಾನಿಗೊಳಗಾಗಿದ್ದು, ಎಕರೆಗೆ ₹ 1 ಲಕ್ಷ ಕೊಟ್ಟರೆ ನಾನೇ ₹ 1 ಕೋಟಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಲಕ್ಷಣ ಸವದಿ ನೀಡಿರುವ ಹೇಳಿಕೆಯನ್ನು ಖಂಡಿಸಿದ ಇಲ್ಲಿನ ರೈತ ಮುಖಂಡರು ಅವರಿಗೆ ₹ 180 ಮನಿ ಆರ್ಡರ್ ಮಾಡಿ ‘ಅನುಕಂಪ, ಆಕ್ರೋಶ’ ವ್ಯಕ್ತಪಡಿಸಿದರು!