ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಬಿಜೆಪಿಯ ಶಿವಕುಮಾರ್ ಉದಾಸಿ ಸತತ ಎರಡು ಬಾರಿ ಗೆದ್ದಿದ್ದು, ಈ ಬಾರಿಯೂ ಅವರೇ ಅಭ್ಯರ್ಥಿ. ಅದಕ್ಕೂ ಮೊದಲು ಕ್ಷೇತ್ರವು ‘ಧಾರವಾಡ ದಕ್ಷಿಣ’ ಎಂದಿತ್ತು. ಇಲ್ಲಿ ಕಾಂಗ್ರೆಸ್ 1962ರಿಂದಲೂ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾ ಬಂದಿತ್ತು. ಆದರೆ, ಸತತ ಮೂರು ಸೋಲಿನಿಂದಾಗಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತೇ ಚರ್ಚೆ ಹೆಚ್ಚಾಗಿದೆ.