ಕುಕ್ಕೆ ಸುಬ್ರಹ್ಮಣ್ಯ(ದಕ್ಷಿಣ ಕನ್ನಡ) : ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಕ್ಕೆಸುಬ್ರಹ್ಮಣ್ಯ ಭೇಟಿಗೆ ಮಳೆ ಅಡ್ಡಿ.ಉದನೆಯಲ್ಲಿ ಗುಂಡ್ಯ ಹೊಳೆಯಿಂದ ರಸ್ತೆ ಸಂಚಾರ ಬಂದ್ ಆಗಿದೆ. ಕುಮಾರಧಾರ ನದಿ ಪ್ರವಾಹದಿಂದ ಪಂಜ ರಸ್ತೆಯೂ ಬಂದ್ ಆಗಿದೆ. ಹೀಗಾಗಿ ಸಿಎಂ ಅವರು ಧರ್ಮಸ್ಥಳದಿಂದ ಪುತ್ತೂರು, ಸೋಣಂಗೇರಿ ಮೂಲಕ ಕುಕ್ಕೆಯತ್ತ ತೆರಳುತ್ತಿದ್ದಾರೆ.