ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Solar Eclipse: ರಾಜ್ಯದ ಹಲವೆಡೆ ಕಂಕಣ ಸೂರ್ಯಗ್ರಹಣ ಗೋಚರ

Last Updated 21 ಜೂನ್ 2020, 6:19 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಬೆಂಗಳೂರು ನಗರ, ಮಂಗಳೂರು, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆ ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ.

ಇಂದು (ಭಾನುವಾರ) ಬೆಳಗ್ಗೆ 10.12ರಿಂದಮಧ್ಯಾಹ್ನ 1.31ರವರೆಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು, ಸೂರ್ಯ ಒಂದು ಬಳೆಯಂತೆ ಕಾಣುವ ಸೌರ ವಿದ್ಯಮಾನ ಇದಾಗಿದ್ದು, ಉತ್ತರ ಭಾರತದ ರಾಜಸ್ಥಾನ, ಹರಿಯಾಣ, ಉತ್ತರಾಖಂಡದ ಕೆಲ ಭಾಗಗಳಲ್ಲಷ್ಟೇ ಪೂರ್ಣ ಪ್ರಮಾಣದ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ದಕ್ಷಿಣ ಭಾರತದಲ್ಲಿ ಪಾರ್ಶ್ವ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ.

ಶೇಕಡ 40ರಷ್ಟು 11.47ರ ವೇಳೆಗೆ ಕಾಣಿಸಿಕೊಳ್ಳಲಿದ್ದು, ಬರಿಗಣ್ಣಿನಿಂದ ಇದನ್ನು ವೀಕ್ಷಿಸುವುದು ಅಪಾಯಕಾರಿ. ಗ್ರಹಣ ವೀಕ್ಷಣೆಗೆ ಎಂದೇ ತಯಾರಿಸಲಾಗಿರುವ ವಿಶೇಷ ಕನ್ನಡಕಗಳನ್ನು ಬಳಸಿ ಇದನ್ನು ನೋಡಬೇಕು ಎಂದು ಬೆಂಗಳೂರಿನ ಜವಾಹರಲಾಲ್‌ ನೆಹರೂ ತಾರಾಲಯ ತಿಳಿಸಿದೆ.

ಗ್ರಹಣ ಪರೀಕ್ಷೆಗೆ ಒನಕೆ ಬಳಕೆ
ಚಿಂಚೋಳಿ (ಕಲಬುರ್ಗಿ ಜಿಲ್ಲೆ):
ಗ್ರಾಮೀಣ ಜನರು ಸೂರ್ಯ ಗ್ರಹಣ ಪತ್ತೆಗೆ ತಮ್ಮದೇ ವಿಧಾನ ಅನುಸರಿಸುತ್ತಾ ಬಂದಿದ್ದಾರೆ. ಬುಟ್ಟಿ ಅಥವಾ ಪಾತ್ರೆ ಹಾಗೂ ಪ್ಲೇಟನಲ್ಲೀ ನೀರು ಹಾಕಿ ಅದರಲ್ಲಿ ಒನಕೆ ನಿಲ್ಲಿಸಲಾಗುತ್ತದೆ.

ಒನಕೆ ನೇರವಾಗಿ ನಿಂತರೆ ಗ್ರಹಣ ಹಿಡಿದಿರುವುದು ಖಾತ್ರಿ. ಆದರೆ ಅದು ನಿಲ್ಲದಿದ್ದರೆ ಒನಕೆ ನಿಲ್ಲುವುದಿಲ್ಲ ಎಂಬ ನಂಬಿಕೆ ನಮ್ಮ ಜನರಲ್ಲಿದೆ ಎಂದು ಗಡಿಕೇಶ್ವಾರ ಗ್ರಾಮದ ಮುಖಂಡ ವೀರೇಶ ಬೆಳಕೇರಿ ಹಾಗೂ ಮಾಳಪ್ಪ ಅಪ್ಪೋಜಿ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಂಕಣ ಸೂರ್ಯಗ್ರಹಣ ಆರಂಭವಾಗುತ್ತಲೇ ಹಳ್ಳಿಗಳಲ್ಲಿ ಒನಕೆ ಬಳಸಿ ಗ್ರಹಣ ಹಿಡಿದಿರುವುದು ಖಾತ್ರಿ ಪಡಿಸಿಕೊಂಡರು.

ಸೂರ್ಯ ಗ್ರಹಣದ ಸಂದರ್ಭದಲ್ಲಿ ಚಾಮರಾಜನಗರದ ಶಂಕರಪುರ ಬಡಾವಣೆಯಲ್ಲಿ ಸ್ಥಳೀಯರು ಕಂಚಿನ ತಟ್ಟೆಯಲ್ಲಿ ನೀರು ಹಾಕಿ, ಅದರಲ್ಲಿ ಒನಕೆ‌ ನಿಲ್ಲಿಸಿರುವುದು. ಗ್ರಹಣ ಆರಂಭದ ನಂತರ ಒನಕೆ ನಿಲ್ಲುತ್ತದೆ. ಗ್ರಹಣ ಮುಕ್ತಾಯವಾದಾಗ ಒನಕೆ ತನ್ನಿಂತಾನೆ ಬೀಳುತ್ತದೆ ಎಂಬ ನಂಬಿಕೆ ಜನರದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT