ಬಜೆಟ್ ಮಂಡನೆಗೆ ಮುನ್ನ ಸಚಿವ ಸಂಪುಟ ಸಭೆ ನಡೆಸುವುದು ರೂಢಿ.ಸಾಮಾನ್ಯವಾಗಿ ಬಜೆಟ್ ಮಂಡನೆ ದಿನ ಮಾಧ್ಯಮಗೋಷ್ಠಿ ನಡೆಸುವ ಪದ್ಧತಿ ಇಲ್ಲ. ಪ್ರತಿಪಕ್ಷ ಬಿಜೆಪಿ, ಮೈತ್ರಿ ಸರ್ಕಾರದ ಪತನಕ್ಕೆ ಹಾಗೂ ಶಾಸಕರ ರಾಜೀನಾಮೆ ಕೊಡಿಸಲು ತಯಾರಿ ಮಾಡಿಕೊಂಡಿರುವ ಸುಳಿವರಿತ ಮುಖ್ಯಮಂತ್ರಿ ಬಜೆಟ್ಗೂ ಮುನ್ನವೇ ಸುದ್ದಿಗೋಷ್ಠಿ ನಡೆಸಿ ಕೆಲವು ರಾಜಕೀಯ ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.