‘ಟಿಪ್ಪು ಅರಸನಾಗುವ ಮುನ್ನ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರು ಮೆರೆದ ಅಟ್ಟಹಾಸ, ದೌರ್ಜನ್ಯಕ್ಕೆ ಲೆಕ್ಕವಿಲ್ಲ. ಇದನ್ನು ಕೊನೆಗಾಣಿಸಿದವ ಟಿಪ್ಪು. ಆದರೆ, ಎಲ್ಲಿಯೂ ಬ್ರಿಟಿಷರ ಕ್ರೂರತೆ ದಾಖಲಾಗಿಲ್ಲ. ಟಿಪ್ಪು ಅನೇಕ ಒಳ್ಳೆಯ ಕೆಲಸ ಮಾಡಿದ್ದಾನೆ, ಕೆಟ್ಟದ್ದನ್ನೂ ಮಾಡಿದ್ದಾನೆ. ಈ ಎರಡನ್ನೂ ದಾಖಲಿಸುವುದು, ನೈಜ ಇತಿಹಾಸವನ್ನು ಮುಂದಿನ ಪೀಳಿಗೆಗೆ ನೀಡುವುದು ಇತಿಹಾಸಕಾರರ ಆದ್ಯ ಕರ್ತವ್ಯವಾಗಬೇಕಿದೆ’ ಎಂದು ನುಡಿದರು.