ಎನ್ಸಿಸಿ ವಿದ್ಯಾರ್ಥಿನಿಯಾದ ಶ್ರೀಷ್ಮಾ ದೆಹಲಿಯ ಗಣರಾಜ್ಯೋತ್ಸವದ ಎನ್ಸಿಸಿ ಪರೇಡ್ಗೆ ಆಯ್ಕೆಯಾಗಿದ್ದರು. ಅವರ ಕಾರ್ಯಕ್ಷಮತೆ ಹಾಗೂ ನಾಯಕತ್ವ ಗುಣ ಗಮನಿಸಿದ ಎನ್ಸಿಸಿ ಅಧಿಕಾರಿಗಳು, ತಂಡದ ನೇತೃತ್ವ ನೀಡಿದ್ದಾರೆ. ಜ. 26ರಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಎನ್ಸಿಸಿ ಪರೇಡ್ನ ಮುಂದಾಳತ್ವ ವಹಿಸಲಿದ್ದಾರೆ.